

14th April 2026

ಗದಗ: 2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಿ, ಅಲ್ಲಿ ರಣಜಿ ಪಂದ್ಯವನ್ನು ಆಯೋಜಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಭಾನುವಾರ ರಾತ್ರಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಉದ್ಘಾಟನಾ ಕಾರ್ಯಕ್ರಮದಲ್ಲಿ
ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗದಗ ನಗರದಲ್ಲಿ ರಣಜಿ ಪಂದ್ಯಗಳು ನಡೆಯುವಂತಾ ಗುಣಮಟ್ಟದ ಮೈದಾನ ನಿರ್ಮಾಣಕ್ಕಾಗಿ ಈಗಾಗಲೇ ಕೆಎಸ್ಸಿಎ ಸಂಸ್ಥೆಗೆ ಹೆದ್ದಾರಿಗೆ ಹೊಂದಿಕೊಂಡೇ ಇರುವ 12 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅದಕ್ಕೆ ಬೇಕಾಗುವ ಬೊರ್ ವೆಲ್ ಮತ್ತು ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಅದಕ್ಕಾಗಿ ರಾಜ್ಯ ಕಿಕ್ರೆಟ್ ಸಂಸ್ಥೆ ಕೂಡಲೇ ಗಮನ ಹರಿಸಬೇಕು. ಧಾರವಾಡ ಝೋನ್ ನ ಈರಣ್ಣ ಸವಡಿ ವಿಶೇಷ ಗಮನ ನೀಡಬೇಕು ಎಂದರು. ಈ ಬಾರಿಯ ಆರ್ಸಿಬಿಯನ್ನು ಖರೀದಿಸಿದ ಮೊತ್ತವನ್ನು ಕೇಳಿದರೆ ಸಾಕು, ಕ್ರಿಕೆಟ್ ಎಷ್ಟು ಶ್ರೀಮಂತ ಕ್ರೀಡೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಗದಗ ಭಾಗದಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗುವಂತಾಗ ಉತ್ತಮ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟ್ ಸಂಸ್ಥೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಗದಗ ನಗರದಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಾಧನೆ ಮಾಡುವುದರಲ್ಲಿ ಇಲ್ಲಿನ ಯುವಕರು ಎತ್ತಿದ ಕೈ, ಆದರೆ ಮೂಲಭೂತ ಸೌಲಭ್ಯಕ್ಕೆ ಕೊರತೆ ಇತ್ತು, ಈಗ ಅದೆಲ್ಲಾ ಸರಿ ಹೋಗಿದೆ. ನಮ್ಮ ಹುಡುಗರು ಒಂದೊಮ್ಮೆ ಸಾಧನೆ ಮಾಡಲು ಪ್ರಾರಂಭ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯಾವಳಿಗಳು ಎಲ್ಲರಿಗೂ ಪ್ರೇರಣೆಯಾಗಲಿ, ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಆ ಮೂಲಕ ನಾಡಿಗೆ ಹೊಸ ಪ್ರತಿಭೆಗಳನ್ನು ಈ ಕ್ರೀಡಾಕೂಟ ಕೊಡುವಂತಾಗಲಿ ಎಂದರು.
ಕೆಎಸ್ ಸಿಎ ಧಾರವಾಡ ಜೋನ್ ಕವ್ನೀಯರ್ ಈರಣ್ಣ ಸವಡಿ ಮಾತನಾಡಿ, ಹಿರಿಯರಾದ ಎಚ್.ಕೆ.ಪಾಟೀಲರ ಸದಾಯಶದಂತೆ 2030 ರಲ್ಲಿ ಗದಗ ನಗರದಲ್ಲಿ ರಣಜಿ ಪಂದ್ಯಗಳನ್ನು ನಡೆಸಲು ಬೇಕಾದ ಮೈದಾನ ನಿರ್ಮಾಣಕ್ಕೆ ವಿಶೇಷ ಗಮನ ನೀಡಲಾಗುವುದು. ಇದಕ್ಕೆ ವಿಶೇಷ ಆದ್ಯತೆ ಮೇರೆಗೆ ನಾವೆಲ್ಲಾ ಶ್ರಮಿಸೋಣ ಎಂದರು.
ಅಂತಾರಾಷ್ಟ್ರೀಯ ಕ್ರಿಕೆಟಿಗ ಗದಗನ ಸುನೀಲ್ ಜೋಶಿ ಮಾತನಾಡಿ, ಗದಗ ಭಾಗದಲ್ಲಿ ಅತ್ಯುತ್ತಮ ಕ್ರಿಕೆಟ್ ಪಟುಗಳಿದ್ದು ಅವರಿಗೆ ಸೂಕ್ತ ವೇದಿಕೆ ಸಿಗಬೇಕಿದೆ. ಇಲ್ಲಿ ಕೂಡಾ ಸಾಕಷ್ಟು ಜನ ಐಪಿಎಲ್ ಆಡುವಂತಾ ಸಾರ್ಮಥ್ಯವನ್ನು ಹೊಂದಿದ್ದಾರೆ. ಆದರೆ ಅವರಿಗೆ ಉತ್ತಮವಾದ ಕ್ರೀಡಾಂಗಣದ ಅವಶ್ಯಕತೆ ಇದೆ, ಗದಗ ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಾನು ಕೂಡಾ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಮಿಥುನ್ ಪಾಟೀಲ, ವೆಂಕಟೇಶಗೌಡ ಪಾಟೀಲ, ಬಸವರಾಜ ಕಡೇಮನಿ, ವಿದ್ಯಾಧರ ದೊಡ್ಡಮನಿ, ಡಾ.ಎಸ್.ಆರ್.ನಾಗನೂರ, ಡಾ.ವೇಮನ ಸಾಹುಕಾರ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ ಶೇಖ ಮುಂತಾದವರು ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿದರು. ಪಂದ್ಯಾವಳಿಯ ಆಯೋಜಕ ಕೃಷ್ಣಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟ್.
ಕಳೆದ ಸಾಲಿನಲ್ಲಿ ಗದಗ ನಗರದಲ್ಲಿ ನಡೆಸಿದ ಕೆ.ಎಚ್.ಪಾಟೀಲ ಕ್ರಿಕೆಟ್ ಲೀಗ್ ಸೀಸನ್ 1 ಅಭೂತಪೂರ್ವ ಯಶಸ್ಸ ಕಂಡಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಿದ ನಮ್ಮ ಯುವಕರು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅದರಂತೆ ಸೀಸನ್ -2 ಕೂಡಾ ಯಶಸ್ವಿಯಾಗಲಿದೆ.
..ಎಚ್.ಕೆ.ಪಾಟೀಲ. ಕಾನೂನು ಸಚಿವ
ಗದಗ: 2030ಕ್ಕೆ ಗದಗ ನಗರದಲ್ಲಿ ಸುಸಜ್ಜಿತವಾದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡಿ, ಅಲ್ಲಿ ರಣಜಿ ಪಂದ್ಯವನ್ನು ಆಯೋಜಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಭಾನುವಾರ ರಾತ್ರಿ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ ಸೀಸನ್-2 ಉದ್ಘಾಟನಾ ಕಾರ್ಯಕ್ರಮದಲ್ಲಿ
ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗದಗ ನಗರದಲ್ಲಿ ರಣಜಿ ಪಂದ್ಯಗಳು ನಡೆಯುವಂತಾ ಗುಣಮಟ್ಟದ ಮೈದಾನ ನಿರ್ಮಾಣಕ್ಕಾಗಿ ಈಗಾಗಲೇ ಕೆಎಸ್ಸಿಎ ಸಂಸ್ಥೆಗೆ ಹೆದ್ದಾರಿಗೆ ಹೊಂದಿಕೊಂಡೇ ಇರುವ 12 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅದಕ್ಕೆ ಬೇಕಾಗುವ ಬೊರ್ ವೆಲ್ ಮತ್ತು ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಕೂಡಾ ಕಲ್ಪಿಸಲಾಗಿದೆ. ಅದಕ್ಕಾಗಿ ರಾಜ್ಯ ಕಿಕ್ರೆಟ್ ಸಂಸ್ಥೆ ಕೂಡಲೇ ಗಮನ ಹರಿಸಬೇಕು. ಧಾರವಾಡ ಝೋನ್ ನ ಈರಣ್ಣ ಸವಡಿ ವಿಶೇಷ ಗಮನ ನೀಡಬೇಕು ಎಂದರು. ಈ ಬಾರಿಯ ಆರ್ಸಿಬಿಯನ್ನು ಖರೀದಿಸಿದ ಮೊತ್ತವನ್ನು ಕೇಳಿದರೆ ಸಾಕು, ಕ್ರಿಕೆಟ್ ಎಷ್ಟು ಶ್ರೀಮಂತ ಕ್ರೀಡೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಗದಗ ಭಾಗದಲ್ಲಿನ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗುವಂತಾಗ ಉತ್ತಮ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಿಕೆಟ್ ಸಂಸ್ಥೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಗದಗ ನಗರದಲ್ಲಿಯೂ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ, ಸಾಧನೆ ಮಾಡುವುದರಲ್ಲಿ ಇಲ್ಲಿನ ಯುವಕರು ಎತ್ತಿದ ಕೈ, ಆದರೆ ಮೂಲಭೂತ ಸೌಲಭ್ಯಕ್ಕೆ ಕೊರತೆ ಇತ್ತು, ಈಗ ಅದೆಲ್ಲಾ ಸರಿ ಹೋಗಿದೆ. ನಮ್ಮ ಹುಡುಗರು ಒಂದೊಮ್ಮೆ ಸಾಧನೆ ಮಾಡಲು ಪ್ರಾರಂಭ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯಾವಳಿಗಳು ಎಲ್ಲರಿಗೂ ಪ್ರೇರಣೆಯಾಗಲಿ, ಹೆಚ್ಚಿನ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಆ ಮೂಲಕ ನಾಡಿಗೆ ಹೊಸ ಪ್ರತಿಭೆಗಳನ್ನು ಈ ಕ್ರೀಡಾಕೂಟ ಕೊಡುವಂತಾಗಲಿ ಎಂದರು.
ಕೆಎಸ್ ಸಿಎ ಧಾರವಾಡ ಜೋನ್ ಕವ್ನೀಯರ್ ಈರಣ್ಣ ಸವಡಿ ಮಾತನಾಡಿ, ಹಿರಿಯರಾದ ಎಚ್.ಕೆ.ಪಾಟೀಲರ ಸದಾಯಶದಂತೆ 2030 ರಲ್ಲಿ ಗದಗ ನಗರದಲ್ಲಿ ರಣಜಿ ಪಂದ್ಯಗಳನ್ನು ನಡೆಸಲು ಬೇಕಾದ ಮೈದಾನ ನಿರ್ಮಾಣಕ್ಕೆ ವಿಶೇಷ ಗಮನ ನೀಡಲಾಗುವುದು. ಇದಕ್ಕೆ ವಿಶೇಷ ಆದ್ಯತೆ ಮೇರೆಗೆ ನಾವೆಲ್ಲಾ ಶ್ರಮಿಸೋಣ ಎಂದರು.
ಅಂತಾರಾಷ್ಟ್ರೀಯ ಕ್ರಿಕೆಟಿಗ ಗದಗನ ಸುನೀಲ್ ಜೋಶಿ ಮಾತನಾಡಿ, ಗದಗ ಭಾಗದಲ್ಲಿ ಅತ್ಯುತ್ತಮ ಕ್ರಿಕೆಟ್ ಪಟುಗಳಿದ್ದು ಅವರಿಗೆ ಸೂಕ್ತ ವೇದಿಕೆ ಸಿಗಬೇಕಿದೆ. ಇಲ್ಲಿ ಕೂಡಾ ಸಾಕಷ್ಟು ಜನ ಐಪಿಎಲ್ ಆಡುವಂತಾ ಸಾರ್ಮಥ್ಯವನ್ನು ಹೊಂದಿದ್ದಾರೆ. ಆದರೆ ಅವರಿಗೆ ಉತ್ತಮವಾದ ಕ್ರೀಡಾಂಗಣದ ಅವಶ್ಯಕತೆ ಇದೆ, ಗದಗ ನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ನಾನು ಕೂಡಾ ವಿಶೇಷ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಮಿಥುನ್ ಪಾಟೀಲ, ವೆಂಕಟೇಶಗೌಡ ಪಾಟೀಲ, ಬಸವರಾಜ ಕಡೇಮನಿ, ವಿದ್ಯಾಧರ ದೊಡ್ಡಮನಿ, ಡಾ.ಎಸ್.ಆರ್.ನಾಗನೂರ, ಡಾ.ವೇಮನ ಸಾಹುಕಾರ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ ಶೇಖ ಮುಂತಾದವರು ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿದರು. ಪಂದ್ಯಾವಳಿಯ ಆಯೋಜಕ ಕೃಷ್ಣಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಟ್.
ಕಳೆದ ಸಾಲಿನಲ್ಲಿ ಗದಗ ನಗರದಲ್ಲಿ ನಡೆಸಿದ ಕೆ.ಎಚ್.ಪಾಟೀಲ ಕ್ರಿಕೆಟ್ ಲೀಗ್ ಸೀಸನ್ 1 ಅಭೂತಪೂರ್ವ ಯಶಸ್ಸ ಕಂಡಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡಿದ ನಮ್ಮ ಯುವಕರು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅದರಂತೆ ಸೀಸನ್ -2 ಕೂಡಾ ಯಶಸ್ವಿಯಾಗಲಿದೆ.
..ಎಚ್.ಕೆ.ಪಾಟೀಲ. ಕಾನೂನು ಸಚಿವ

ನವೀನ್ ಗುಳಗಣ್ಣನಗೆ ಮತ್ತೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ- ಪಕ್ಷ ಸಂಘಟನೆಯಲ್ಲಿ ವಿಫಲ: ದಢೇಸೂಗೂರಗೆ ಕೊಕ್
ಸತ್ವ, ತತ್ವ ಆಧಾರಿತ ಆಡಳಿತ ನಮ್ಮದು, ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಹೊರೆಯಲ್ಲ : ಎಚ್ ಕೆ ಪಾಟೀಲ